ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ನವ೦ಬರ್ 1 , 2015
|
ನವೆ೦ಬರ್ 1, 2015
|
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಪುತ್ತೂರು :
ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಸಾಧನೆಗಾಗಿ ಪುಣಚ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿರವರು 2015ನೇ ಸಾಲಿನ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಜ್ಯ ಸರಕಾರವು ವಿವಿಧ ಕ್ಷೇತ್ರದ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂಡಂಬೈಲು ಶಾಸ್ತ್ರಿರವರನ್ನು ಪ್ರಶಸ್ತಿಗೆ ಆಯ್ಕೆಮಾಡಿದ್ದು, ನ. 1ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ತಾಳಮದ್ದಳೆಗಳಲ್ಲಿ ರಾಮ, ಕೃಷ್ಣ, ಧರ್ಮರಾಯ, ಅರ್ಜುನ, ಭೀಮ, ಹನುಮಂತ, ಕರ್ಣ, ಭೀಷ್ಮ, ತಾಮ್ರಧ್ವಜ ಮೊದಲಾದ ಪುರುಷ ಪಾತ್ರಗಳು, ಅಂಬೆ, ಮಂಡೋದರಿ, ಕೈಕೆ, ಸೀತೆ, ದಾಕ್ಷಾಯಣಿ, ಪ್ರಭಾವತಿ, ದ್ರೌಪದಿ, ತಾರೆ ಮೊದಲಾದ ಸ್ತ್ರೀ ಪಾತ್ರಗಳನ್ನು ಅಸಾಮಾನ್ಯ ನೆಲೆಗಳಲ್ಲಿ ವಿಸ್ತರಿಸಬಲ್ಲ ಬಹುಶ್ರುತ ವಿದ್ವಾಂಸರು ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು.
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂಡಂಬೈಲು ಚಕ್ರಕೋಡಿ ವೆಂಕಟರಮಣ ಶಾಸ್ತ್ರಿ-ಪರಮೇಶ್ವರಿ ಅಮ್ಮ ದಂಪತಿ ಪುತ್ರನಾಗಿ ಬಡತನದ ಬಾಲ್ಯದ ನಡುವೆಯೇ ಉತ್ತಮ ಶೈಕ್ಷಣಿಕ ಶಕ್ತಿಯೊಂದಿಗೆ ಬೆಳೆದು ನಿಂತವರು. ವಿದ್ವಾಂಸರಾಗಿ, ಕಲಾವಿದರಾಗಿ, ಪ್ರವಚನಕಾರರಾಗಿ, ಬರಹಗಾರರಾಗಿ ಹೆಸರಾದ ಇವರು ನಿವೃತ್ತ ಮುಖ್ಯ ಶಿಕ್ಷಕರು ಮತ್ತು ಅಂಚೆ ಪಾಲಕರಾಗಿಯೂ ದುಡಿದವರು. ಮಹಾಭಾರತ ಕೋಶ, ವಾಲ್ಮೀಕಿ ರಾಮಾಯಣ ಕೋಶ, ಕುಮಾರ ವಿಜಯ ಮೊದಲಾದ ಹಲವು ಕೃತಿಗಳನ್ನು ರಚಿಸಿದ ಅವರ ಏಕಾಂಕ ನಾಟಕಗಳೂ ಜನಪ್ರಿಯವಾಗಿದೆ.
ಕೃಪೆ :
suddinews
|
|
|